ಹರಪನಹಳ್ಳಿ : ನಗರದ ಪ್ರಸಿದ್ಧ ಶ್ರೀ ಕೋಟೆ ಆಂಜನೇಯ ದೇವಸ್ಥಾನಕ್ಕೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸಲಾಗಿದ್ದು, ಶೀಘ್ರ ಆಡಳಿತಾಧಿಕಾರಿ ನೇಮಿಸಬೇಕು ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ್ ಒತ್ತಾಯಿಸಿದರು
ನಗರದ ಪ್ರವಾಸಿಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶ್ರೀ ಕೋಟೆ ಅಂಜನೇಯ ದೇವಸ್ಥಾನವು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟು ಈಗಾಗಲೇ ಒಂದೂವರೆ ತಿಂಗಳು ಕಳೆದಿದೆ, ಆದರೂ ಸಹ ಇಲ್ಲಿಯವರೆಗೂ ತಹಶೀಲ್ದಾರ್ ಅವರು ಅಧಿಕಾರ ವಹಿಸಿಕೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿದರು.
ಮುಖಂಡರಾದ ಶಿರಹಟ್ಟಿ ದಂಡೆಪ್ಪ, ಎಚ್.ವಸಂತಪ್ಪ ಮಾತನಾಡಿ, ನಿಟ್ಟೂರು ಸಣ್ಣಹಾಲಪ್ಪ ಮಾತನಾಡಿದರು. ಎಸ್ಎಸ್ಎನ್ ನಿರ್ದೇಶಕ ಗಾಟೆನ ಬಸಪ್ಪ, ಮೇಘರಾಜ, ವರಕೇರಿ ಅಂಜಿನಪ್ಪ, ಟಪಾಲಿ ಕೊಟ್ರಪ್ಪ, ತಲುವಾಗಲು ಹನುಮಂತಪ್ಪ ಇದ್ದರು.
Leave a comment