ಹರಪನಹಳ್ಳಿ : ಬಡವರಿಗೆ, ನಿರ್ಗತಿಕರಿಗೆ ನೆರವು ನೀಡುವಂತಹ ಸಮಾಜಮುಖಿ ಕೆಲಸಗಳು ಜನಮಾನಸದಲ್ಲಿ ಉಳಿಯುತ್ತವೆ ಎಂದು ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಅವರ 46ನೇ ವರ್ಷದ ಹುಟ್ಟು ಹಬ್ಬದ ಆಚರಣೆ ನಿಮಿತ್ತ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಷ್ಟವೆಂದು ಬಂದಾಗ ಯಾವುದೇ ಪಕ್ಷ, ಜಾತಿ, ಧರ್ಮ ನೋಡದೆ ಸಹಕಾರ ಮಾಡುತ್ತಿರುವ ವೈ.ಡಿ.ಅಣ್ಣಪ್ಪ ಅವರು ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿದ್ದಾರೆ ಎಂದರು.
ಯೋಗನರಸಿಂಹ ಸೌಹಾರ್ದ ಸಹಕಾರಿ ಬ್ಯಾಂಕ್ ನ ಬಿತ್ತಿಪತ್ರಗಳು, 2026ನೇ ವರ್ಷದ ಕ್ಯಾಲೆಂಡರ್ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಸಾನ್ನಿದ್ಯವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೊಟ್ಟೂರಿನ ಶಿವಯೋಗಿ ರಾಜೇಂದ್ರ ಮಹಾ ಸ್ವಾಮಿಗಳು, ಮಾಜಿ ಸಂಸದ ವೈ. ದೇವೇಂದ್ರಪ್ಪ, ಯರಬಳ್ಳಿ ಉಮಾಪತಿ, ಸುಶೀಲಮ್ಮ, ಚಂದನ, ಸಾನ್ವಿ, ಪ್ರಶಾಂತ್ ಪಾಟೀಲ್, ಲಕ್ಷ್ಮಿದೇವಿ ಅಣ್ಣಪ್ಪ, ನಂಜನಗೌಡ, ಫಣಿಯಾಪುರದ ಲಿಂಗರಾಜ್, ಯರಬಳ್ಳಿ ವಿಜಯ್ ಕುಮಾರ್, ಅರಸೀಕೆರೆಯ ಬಿ.ರಾಮಣ್ಣ,ಪೂಜಾರ್ ಮರಿಯಪ್ಪ, ವೈ.ಎ.ಮಿಂಚು, ವೈ.ಎ. ಪ್ರೀತಮ್, ಪರಶುರಾಮ್, ಶ್ರೀನಿವಾಸ ಇತರರಿದ್ದರು.
Leave a comment