ಹರಪನಹಳ್ಳಿ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತಾಲ್ಲೂಕಿನ ಬಳಿಗನೂರು ಗ್ರಾಮದ ಹೆಮ್ಮೆಯ ಪ್ರತಿಭೆ ಡಿ.ಎಂ.ಅರ್ಚನಾ ಹಾಗೂ ಅವರ ಪೋಷಕರನ್ನು ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಶನಿವಾರ ಸನ್ಮಾನಿಸಿ ಗೌರವಿಸಿದರು.
ಡಿ.ಹನುಮಂತಪ್ಪ ಮತ್ತು ರೇಣುಕಮ್ಮ ದಂಪತಿಯ ಪುತ್ರಿಯಾದ ಅರ್ಚನಾ, ಸೌಲಭ್ಯಗಳಿಲ್ಲದ ಕುಗ್ರಾಮದಿಂದ ನಿತ್ಯ ಕೊಟ್ಟೂರಿನ ಇಂದು ಪಿಯು ಕಾಲೇಜಿಗೆ ಪ್ರಯಾಣಿಸಿ ಶಿಕ್ಷಣ ಪಡೆದಿದ್ದರು. ಅವರ ಈ ಕಠಿಣ ಪರಿಶ್ರಮ ಮತ್ತು ಐತಿಹಾಸಿಕ ಸಾಧನೆಯನ್ನು ಮೆಚ್ಚಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ, ದಲಿತ ಸಂಘರ್ಷ ಸಮಿತಿ (ಭೀಮವಾದ) ಹಾಗೂ ಅಂಬೇಡ್ಕರ್ ಸೇವಾ ಸಮಿತಿಯ ಮುಖಂಡರು ಅರ್ಚನಾ ಮತ್ತು ಅವರ ತಂದೆ-ತಾಯಿಯನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಿ.ವಸಂತ್, ಎನ್.ಸಂಜೀವಪ್ಪ, ಕೆ.ಸುಭಾಷ್, ಕೆ.ಭರತ್, ಛತ್ರಪತಿ, ಎಚ್.ಪರಶುರಾಮ್, ಜಗದೀಶ ಪೂಜಾರ, ದುರುಗೇಶ್, ಪ್ರಶಾಂತ್, ಚಂದ್ರು ಗುಂಡಗತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Leave a comment