ಹರಪನಹಳ್ಳಿ : ದ್ವಿತೀಯ ಪಿಯು ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ತಾಲ್ಲೂಕಿನ ಮೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಿಗನೂರು ಗ್ರಾಮದ ದಲಿತ ಕುಟುಂಬದ ವಿದ್ಯಾರ್ಥಿನಿ ಡಿ.ಬಿ.ಅರ್ಚನಾ ಅವರನ್ನು ಹರಪನಹಳ್ಳಿ ಬಿಜೆಪಿ ಮಂಡಲ ಪದಾಧಿಕಾರಿಗಲು ಸನ್ಮಾನಿಸಿದರು.
ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಬಳಿಗನೂರು ಗ್ರಾಮದ ಅರ್ಚನಾ ಮನೆಗೆ ಬೇಟಿ ನೀಡಿ ಚರ್ಚಿಸಿದರು. 600ಕ್ಕೆ 598 ಅಂಕಗಳಿಸಿದ ವಿದ್ಯಾರ್ಥಿನಿ ಅರ್ಚನಾಗೆ ಶುಭಾಶಯ ಕೋರಿದರು. ಮಂಡಲ ಅಧ್ಯಕ್ಷ ಯಡಿಹಳ್ಳಿ ಕೆ.ಶೇಖರಪ್ಪ, ಜಿಲ್ಲಾ ಕಾರ್ಯದರ್ಶಿ ಆರ್.ಲೋಕೇಶ್, ಮುಖಂಡರಾದ ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಕಾರ್ಯದರ್ಶಿ ಎಂ.ಮಲ್ಲೇಶ್, ರೈತ ಮೋರ್ಚಾ ಅಧ್ಯಕ್ಷ ಗುರುಲಿಂಗನಗೌಡ, ಯುವ ಮೋರ್ಚಾ ಉಪಾಧ್ಯಕ್ಷ ದೇವರಾಜ್ ಮುಖಂಡರಾದ ಬಳಿಗನೂರು ಮಂಜುನಾಥಗೌಡ, ಬಳಿಗನೂರು ನಾಗರಾಜ, ಕಾರ್ಯಕರ್ತರು ಇದ್ದರು.
Leave a comment