ದಾವಣಗೆರೆ : ಕೆಯುಐಡಿಎಫ್ಸಿ ಇಲಾಖಾ ವತಿಯಿಂದ ನಗರದಲ್ಲಿ ಜಲಸಿರಿ ಯೋಜನೆಯನ್ನು ಕೈಗೊಳ್ಳಲಾಗಿದ್ದು, ಅದರಂತೆ 60 ಎಂ.ಎಲ್.ಡಿ ಬಾತಿ ನೀರು ಶುದ್ದೀಕರಣ ಘಟಕದಲ್ಲಿ ಶುದ್ದೀಕರಿಸಿದ ನೀರಿನ ಪೈಪ್ಲೈನ್ ದುರಸ್ಥಿ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ದುರಸ್ಥಿ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ನೀರು ಶುದ್ದೀಕರಣ ಘಟಕವು ಎರಡು ದಿನಗಳು ಸ್ಥಗಿತವಾಗುವ ಕಾರಣ ಜುಲೈ 16 ಮತ್ತು 17 ರಂದು ನಗರಕ್ಕೆ ಸರಬರಾಜಾಗುವ ಕುಡಿಯುವ ನೀರಿನ ವಿತರಣೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
Leave a comment