ಹರಪನಹಳ್ಳಿ : ತಾಲ್ಲೂಕು ಮಾದಿಗ ಮಹಾಸಭಾ ನೂತನ ಅಧ್ಯಕ್ಷರನ್ನಾಗಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹುಲಿಕಟ್ಟೆ ಚಂದ್ರಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ನಗರದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಸೋಮವಾರ ಜರುಗಿದ ಮಾದಿಗ ಸಮಾಜದ ಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ ಚಂದ್ರಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ ಸಂಘದ ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ, ಸಮಾಜದ ಹಿರಿಯ ಮುಖಂಡರಾದ ಪೂಜಾರ ಮರಿಯಪ್ಪ, ಮೈದೂರು ಒ.ರಾಮಪ್ಪ, ಒ.ಮಹಾಂತೇಶ್, ಮತ್ತಿಹಳ್ಳಿ ರಾಮಪ್ಪ, ಕಬ್ಬಳ್ಳಿ ಪರಸಪ್ಪ, ಕಬ್ಬಳ್ಳಿ ಮೈಲಪ್ಪ, ನಿಂಗರಾಜ್, ನಿಟ್ಟೂರು ಹನುಮಂತಪ್ಪ, ಎಚ್.ಕೊಟ್ರೇಶ್, ಮಾಳ್ಗಿ ರಮೇಶ್, ಎಚ್.ಸುರೇಶ್, ಪುಣಬಗಟ್ಟಿ ಹನುಮಂತಪ್ಪ, ಮಸಲವಾಡ ರಾಜಪ್ಪ, ಬಾಗಳಿ ಚನ್ನಬಸಪ್ಪ, ಕೆ.ಸುಭಾಷ್, ಪುಣಬಗಟ್ಟಿ ಕೆಂಚಪ್ಪ, ಮಂಜಪ್ಪ, ರಾಗಿಮಸಲವಾಡ ರಾಜಪ್ಪ, ನೀಲಗುಂದ ಸಣ್ಣಪ್ಪ, ಶಾಸಪ್ಪ, ನಿಚ್ಚವ್ವನಹಳ್ಳಿ ರಾಜಪ್ಪ, ಕುಂಚೂರು ಮಂಜಪ್ಪ, ಹಲುವಾಗಲು ಚಂದ್ರಪ್ಪ, ಮಾಡಲಗೇರಿ ರಾಜಪ್ಪ ಇದ್ದರು.
Leave a comment