ಹರಪನಹಳ್ಳಿ : ಗ್ರಾಮಗಳ ಅಭಿವೃದ್ದಿ ದೃಷ್ಟಿಯಿಂದ ಪ್ರತಿಯೊಬ್ಬರು ತೆರಿಗೆ ಪಾವತಿಸಬೇಕು ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಚ್.ಎಸ್.ಹೇಮಂತಕುಮಾರ ತಿಳಿಸಿದರು.
ತಾಲ್ಲೂಕಿನ ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಜರುಗಿದ ಸಾಮಾನ್ಯಸಭೆಯಲ್ಲಿ ಅವರು ಮಾತನಾಡಿದರು. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು,ಬೀದಿ ದೀಪದ ವ್ಯವಸ್ಥೆ, ಚರಂಡಿ ನಿರ್ಮಾಣ ಹಂತಹಂತವಾಗಿ ಅಗತ್ಯವಿರುವ ಕಡೆಗೆ ಮಾಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೂದಿಹಾಳು,ಹೊಸಕೋಟೆ, ಕೆರೆಗುಡಿಹಳ್ಳಿ, ಚಿಕ್ಕ ಕಬ್ಬಳ್ಳಿ, ಕೋಣನಕಟ್ಟೆ ಗ್ರಾಮಗಳ ಸದಸ್ಯರು ಸಭೆಯಲ್ಲಿ ಹಾಜರಿದ್ದು, ತಮ್ಮ ವಾರ್ಡುಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ದಿ ಕಾಮಗಾರಿ ಬಗ್ಗೆ ವಿವರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ನಾಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಸ್ಯರಾದ ಸಿದ್ದೇಶ, ಶ್ರೀನಿವಾಸ್, ಕರಿಬಸಪ್ಪ, ಕೆಂಚಪ್ಪ, ಗೌರಮ್ಮ, ಬಸಮ್ಮ, ಮಂಜಕ್ಕ, ಮುಖಂಡರಾದ ಕೃಷ್ಣ, ಆನಂದಪ್ಪ, ರೇವಣಸಿದ್ದಚಾರಿ, ಚನ್ನಬಸಪ್ಪ ಇದ್ದರು.
Leave a comment