ಹರಪನಹಳ್ಳಿ : ತಾಲ್ಲೂಕು ಚೆನ್ನಾಪುರ ಗ್ರಾಮದಲ್ಲಿ ಮಹೇಶ್ವರ ಸ್ವಾಮಿ ಜಾತ್ರೆ ಹಾಗೂ ಕಾರ್ತಿಕೋತ್ಸವ ವಿಜೃಂಭಣೆಯಿಂದ ನೆರವೇರಿತು.
ರಾಮಘಟ್ಟ ಕಟ್ಟೆಮನೆ ರಾಜಗುರು ಪುರವರ್ಗ ಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾಘ ಮಾಸದ ಕೊನೆ ಮಂಗಳವಾರ ಮಹೇಶ್ವರ ಜಾತ್ರೆ ಹಾಗೂ ಕಾರ್ತಿಕ ಧಾರ್ಮಿಕ ಕಾರ್ಯಕ್ರಮದಿಂದ ಜನರು ಜಾಗೃತರಾಗಿರುತ್ತಾರೆ. ಇದು ಲೋಕ ಕಲ್ಯಾಣಾರ್ಥ ನಡೆಯುವ ಕಾರ್ಯಕ್ರಮಗಳು ನಡೆದವು ಎಂದರು.
ಮಹೇಶ್ವರ ಸ್ವಾಮಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಸಕಲ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆಯಲ್ಲಿ ಡೊಳ್ಳು, ಸಮ್ಮಾಳ, ನಂದಿಕೋಲು,ಭಜನೆ ಮೆರುಗು ನೀಡಿದವು. ಚನ್ನಾಪುರ ಮಠದ ಚಂದ್ರಶೇಖರಯ್ಯ, ಗಂಗಾಧರ, ಗ್ರಾಮ ಪಂಚಾಯಿತಿ ಸದಸ್ಯ ಹನುಮಂತಪ್ಪ, ಹೇಮಯ್ಯ, ಷಣ್ಮುಖಪ್ಪ, ಅನಿಲ, ವೀರಯ್ಯ, ಶಿವಪುತ್ರಯ್ಯ ಇದ್ದರು.
Leave a comment