ವಿಜಯನಗರ : ತಾಲೂಕಿನ ಎಂ.ಪಿ. ಪ್ರಕಾಶ ನಗರ, ಸಾಯಿ ಕಾಲೋನಿಯ ನಿವಾಸಿ ಕೆ.ಎಂ. ನಾಗಬಸಯ್ಯ ತಂದೆ ಬಸಯ್ಯ ಸ್ವಾಮಿ ಸುಮಾರು 43 ವರ್ಷದ ವ್ಯಕ್ತಿ ಕಾಣೆಯಾಗಿದ್ದು, ಈ ಕುರಿತು ಬಳ್ಳಾರಿ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಕೆ.ಎಂ. ನಾಗಬಸಯ್ಯ ಸುಮಾರು 5.5 ಅಡಿ ಎತ್ತರ, ಬಲವಾದ ಮೈಕಟ್ಟು, ದುಂಡು ಮುಖ, ಅಗಲವಾದ ಹಣೆ, ಬಲಗಡೆ ಮೂಗಿನ ಪಕ್ಕದಲ್ಲಿ ಪುಟ್ಟ ಕಪ್ಪು.
ಎಡಗಾಲಿನ ಪಾದದ ಮೇಲೆ ಹಳೆಯ ಗಾಯದ ಗುರುತು ಹೊಂದಿದ್ದು, ಗ್ರೇ ಬಣ್ಣದ ಆಫ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಮತ್ತು ನೀಲಿ ಬಣ್ಣದ ಕೈಗಡಿಯಾರ ಧರಿಸಿರುತ್ತಾನೆ. ಕಾಣೆಯಾದ ವ್ಯಕ್ತಿಯು ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆ ಮಾತನಾಡುವನು. ಈ ಮೇಲ್ಕಂಡ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಬಳ್ಳಾರಿ ರೈಲ್ವೇ ಪಿ.ಎಸ್. ಮೊ. ಸಂ: 9480802131, ಬೆಂಗಳೂರು ರೈಲ್ವೇ ಕಂಟ್ರೋಲ್ ರೂಂ ಸಂ: 9480802140 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Leave a comment