ಹರಪನಹಳ್ಳಿ : ತಾಲ್ಲೂಕಿನ ಇತಿಹಾಸ ಪ್ರಸಿದ್ದ ಕೂಲಹಳ್ಳಿ ಗೋಣಿ ಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವ ಡಿ.15ರ ಸೋಮವಾರ ಜರುಗಲಿದೆ.
ವಿಶ್ವಾವಸುನಾಮ ಸಂವತ್ಸರದ ಮಾರ್ಗಶಿರ ಬಹುಳ ಏಕಾದಶಿಯಂದು ಕಾರ್ತಿಕೋತ್ಸವವು ಸಂಸ್ಥಾನದ ಪಟ್ಟದ ಚಿನ್ಮಯಸ್ವಾಮಿಗಳು, ಅರುಣಕುಮಾರ ಸ್ವಾಮೀಜಿಗಳ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಕ್ತರು ಸಕಾಲಕ್ಕೆ ಆಗಮಿಸಿ ತನುಮನ, ಧನದಿಂದ ಸೇವೆ ಸಲ್ಲಿಸಬೇಕು ಎಂದು ದೇವಸ್ಥಾನ ಸಮಿತಿಯ ಆಡಳಿತಾಧಿಕಾರಿ ಪುಷ್ಪಾವತಿ ಭರಡಿ ಹಾಗೂ ಸಹಾಯಕ ಆಯುಕ್ತರಾದ ಹೆಚ್.ಸವಿತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a comment