ಹರಪನಹಳ್ಳಿ : ಇಲ್ಲಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಡಿ.15ರ ಸೋಮವಾರ ಬೆಳಿಗ್ಗೆ 9 ಗಂಟೆಗೆ ಅಂಗವಿಕಲರಿಗಾಗಿ ತಾಲ್ಲೂಕು ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್.ಚಂದ್ರಶೇಖರ ತಿಳಿಸಿದರು.
ಸ್ಪರ್ಧೆಯಲ್ಲಿ ವಿಜೇತರಿಗೆ ವಿಶ್ವ ವಿಕಲಚೇತನರ ದಿನಾಚರಣೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. ಅಂಗವಿಕಲಗಿಗಾಗಿ ಊರುಗೋಲು ಓಟ, ಗುಂಡು ಎಸೆತ, ವೀಲ್ ಚೇರ್ ಓಟ, ದೃಷ್ಟಿದೋಷವುಳ್ಳವರಿಗೆ ಬಿಳಿ ಕೋಲು ಓಟ, ಗುಂಡು ಎಸೆತ, ಶ್ರವಣ ದೋಷವುಳ್ಳವರಿಗೆ ಓಟ, ರಿಂಗ್ ಎಸೆತ, ಕ್ರಿಕೆಟ್, ಗುಂಡು ಎಸೆತ, ಬೌದ್ಧಿಕ ವಿಕಲಚೇತನರಿಗೆ ಚೆಂಡು ಎಸೆತ, ಮ್ಯುಸಿಕಲ್ ಚೇರ್ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ದೈಹಿಕ ವಿಕಲಚೇತನರಿಗೆ ಭಾವಗೀತೆ, ಜಾನಪದ ಗೀತೆ, ಭಾವಗೀತೆ, ಜಾನಪದ, ಚಿತ್ರಕಲೆ, ವೇಷಭೂಷಣ ಸ್ಪರ್ಧೆಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9901182525 ಸಂಖ್ಯೆ ಸಂಪರ್ಕಿಸಲು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.
Leave a comment