ವಿಜಯನಗರ : ಸಿ.ಇ.ಪಿ.ಎಂ.ಐ.ಜೆಡ್. ಯೋಜನೆಯಡಿ ಹೊಸಪೇಟೆ ತಾಲೂಕಿನ ಗಣಿಬಾದಿತ ಗ್ರಾಮಗಳಲ್ಲಿ ಎರಡು ಮಿಶ್ರತಳಿ ಹಸು ಹಾಗೂ ಉನ್ನತೀಕರಿಸಿದ ಎಮ್ಮೆ ಸಾಕಾಣಿಕೆಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನವಾಗಿದೆ.
ಈ ಯೋಜನೆಯನ್ನು ಕೆ.ಎಂ.ಇ.ಆರ್.ಸಿ ಮಾರ್ಗಸೂಚಿಯಂತೆ ಅನುಷ್ಠಾನಗೊಳಿಸಲು ಜಿ.ಪಿ.ಎಲ್.ಎಫ್ ಘಟಕದ ನೋಂದಾಯಿತ ಸಕ್ರಿಯ ಎಸ್.ಎಚ್.ಜಿ ಸದಸ್ಯರುಗಳು ಇಲಾಖೆ ವೆಬ್ಸೈಟ್ www.vijayanagara.nic.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆ ಅಥವಾ ಸಂಭಂದಿತ ಗ್ರಾಮ ಪಂಚಾಯತಿಯ ಜಿ.ಪಿ.ಎಲ್.ಎಫ್ ಗಳನ್ನು ಸಂಪರ್ಕಿಸುವುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a comment