ಹರಪನಹಳ್ಳಿ : ಯಾವುದೇ ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಕ್ರೀಡಾಸಕ್ತಿಯಿಂದ ಪಾಲ್ಗೊಳ್ಳುವುದು ಮುಖ್ಯವೆಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಜೈ ದುರ್ಗಾ ಕ್ರಿಕೆಟರ್ಸ್ ವತಿಯಿಂದ 4ನೇ ಬಾರಿ ಗ್ರಾಮೀಣ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವಿಫುಲ ಅವಕಾಶಗಳಿರುತ್ತವೆ. ಆದರೆ ಸರಿಯಾದ ಮಾರ್ಗದರ್ಶನವಿಲ್ಲದೇ ಅವಕಾಶ ವಂಚಿತರಾಗಿ ಬಿಡುತ್ತಾರೆ. ಪ್ರತಿಭಾವಂತ ಕ್ರೀಡಾಪಟುಗಳು ಉತ್ತಮವಾಗಿ ಸ್ಪರ್ಧಿಸಬೇಕು. ಗ್ರಾಮೀಣ ಭಾಗದ ಮಕ್ಕಳು ಉನ್ನತ ಸ್ಥಾನಕ್ಕೆ ಬೆಳೆಯಬೇಕು ಎಂದು ತಿಳಿಸಿದರು.
ಉಚ್ಚಂಗಿದುರ್ಗಕ್ಕೆ ಸುಸಜ್ಜಿತ ಕ್ರೀಡಾಂಗಣ ಅವಶ್ಯಕತೆಯಿದೆ, ಮುಂಬರುವ ಚುನಾವಣೆಯಲ್ಲಿ ಜನರು ಸಹಕಾರ ನೀಡಿ ಗೆಲ್ಲಿಸಿದರೆ, ಉತ್ತಮ ಕ್ರೀಡಾಂಗಣ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು. ಜ.10 ರಿಂದ ಆರಂಭವಾಗಿದ್ದ ಕ್ರೀಡಾಕೂಟ ಜ.12ಕ್ಕೆ ಮುಕ್ತಾಯಗೊಂಡವು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬೇವಿನಹಳ್ಳಿ ಪಿ.ಕೆಂಚನಗೌಡ್ರು, ಕಮ್ಮತ್ತಹಳ್ಳಿ ಮುರುಗೇಶ್, ಧರ್ಮನಾಯಕ್, ಚಟ್ನಿಹಳ್ಳಿ ಬಸವರಾಜ್, ಅಣಜಿಗೆರೆ ಮಲ್ಲಿಕಾರ್ಜುನ್, ಉಚ್ಚಂಗಿದುರ್ಗದ ಯುವರಾಜ್, ಅಂಜಿನಪ್ಪ, ಬಸಣ್ಣ, ಫಣಿಯಾಪುರದ ಲಿಂಗರಾಜ್, ಪಿಡಿಒ ಸಿದ್ದೇಶ್ ಹಾಗೂ ಕ್ರೀಡಾಪಟುಗಳಿದ್ದರು.
Leave a comment