ವಾರುಣಿ ಮುಡಿಗೇರಿದ ವಿಶ್ವ ಚೆಸ್ ಕಪ್ ಚಾಂಪಿಯನ್

Sirisuddi Kannada
1 Min Read

ಹರಪನಹಳ್ಳಿ : ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದ ಡಾ.ಅಶೋಕ ನಂಜನಗೌಡರ ಮತ್ತು ಡಾ.ಶಕುಂತಲಾ ದಂಪತಿ ಪುತ್ರಿ ವಾರುಣಿ ನಂಜನಗೌಡರ ಅವರು ಭಾನುವಾರ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಡಿ.14ರ ಭಾನುವಾರ ಕೊಪ್ಪಳ ನಗರದಲ್ಲಿ ವಿಶ್ವ ಚೆಸ್ ಅಕಾಡೆಮಿ, ಕೊಪ್ಪಳ ಯುವಜನ ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಚೆಸ್ ಚಾಂಪಿಯನ್ ಕಪ್‌-2025ರ 10 ವರ್ಷ ವಯೋಮಿತಿಯ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಾರುಣಿ ಅವರು ರಾಜ್ಯಮಟ್ಟದ ಟೂರ್ನಮೆಂಟ್‌ ನಲ್ಲಿ ಪ್ರಥಮ ಸ್ಥಾನ ಪಡೆದು ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಉಚ್ಚಂಗಿದುರ್ಗದ ಪುಷ್ಪಗಿರಿ ಪಬ್ಲಿಕ್‌ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ವಾರುಣಿ ಅವರ ಸಾಧನೆಗೆ ಶಾಲಾಡಳಿತ ಮಂಡಳಿ, ಪೋಷಕರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment