ಹರಪನಹಳ್ಳಿ ಕಾರ್ಯನಿರತ ಪತ್ರಕರ್ತರ ಸಮಿತಿ ಅಧ್ಯಕ್ಷ ನಾಗೇಂದ್ರಪ್ಪ

Sirisuddi Kannada
1 Min Read

ಹರಪನಹಳ್ಳಿ :  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿಯ ಹರಪನಹಳ್ಳಿ ತಾಲ್ಲೂಕು ಘಟಕ ಅಸ್ತಿತ್ವಕ್ಕೆ ತರಲಾಗಿದ್ದು, ಗೌರವ ಅಧ್ಯಕ್ಷರಾಗಿ ಕೆ.ಉಚ್ಚೆಂಗೆಪ್ಪ, ತಾಲ್ಲೂಕು ಅಧ್ಯಕ್ಷರಾಗಿ ಎ.ನಾಗೇಂದ್ರಪ್ಪ,  ಉಪಾಧ್ಯಕ್ಷರಾಗಿ  ಪಟ್ನಾಮದ ವೆಂಕಟೇಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಿ.ವೈ.ದುರುಗೇಶ್ ಅವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ಖಜಾಂಚಿ ಎ.ವೆಂಕಟರಾಜು, ಸಂಘಟನಾ ಕಾರ್ಯದಶಿಗಳಾದ ರಾಮಚಂದ್ರ ನಾಗತಿಕಟ್ಟೆ, ಹಾಗೂ ಶಬ್ಬೀರ ಸಾಹೇಬ್, ಸಹ ಕಾರ್ಯದರ್ಶಿಯಾಗಿ ನಾಗಭೂಷಣ್ ಸಂಡೂರು ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರು :  ಹಿರಿಯ ಪತ್ರಕರ್ತ ವಿಶ್ವನಾಥ, ಪಟ್ನಾಮದ್ ಬಸವರಾಜ, ಕವಸರ ಬಸವರಾಜ, ಹೆಚ್.ಪರಶುರಾಮ, ಮಾರುತಿ ಪೂಜಾರ, ಮೈಲಾರಿ, ಭೋವಿ ಮಂಜುನಾಥ, ಹೆಚ್.ಶಶಿಕುಮಾರ್, ಬಿ.ನಾಗರಾಜ್, ರುದ್ರಮುನಿ, ಬಸವರಾಜ ಹುಲಿಯಪ್ಪನವರ, ತಿರುಮಲ, ಅಶೋಕ, ಅಡವಿಗೌಡರ ಬಸವರಾಜ ಅವರನ್ನು ಆಯ್ಕೆ ಮಾಡಲಾಗಿದೆ.

ಕ.ಕಾ.ನಿ.ಪ.ಸಮಿತಿ ಗೌರವಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ. ಪತ್ರಕರ್ತರ ಮದ್ಯೆ ಮೇಲು ಕೀಳೆಂಬ ತಾತ್ಸಾರ ಮನೋಭಾವ, ಕೀಳರಿಮೆ ಇರಬಾರದು, ನಮ್ಮ ಸುಸಂಸ್ಕೃತ ನಡವಳಿಕೆಯ ಮೂಲಕ ನಾವುಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಬೇಕು, ನಿರಂತರ ಪ್ರಯತ್ನದಿಂದ ಯಾವುದೇ ಕಾರ್ಯಗಳಲ್ಲಿ ಯಶಸ್ಸು ಗಳಿಸಲು ಸಾದ್ಯ. ಇಂದು ಪತ್ರಿಕಾ ಕ್ಷೇತ್ರವು ದೊಡ್ಡ ಶಕ್ತಿಯಾಗಿ ಬೆಳೆದು ನಿಂತಿದೆ ಎಂದು ಹೇಳಿದರು.

ಕ.ಕಾ.ನಿಪ.ಸಮಿತಿಯ ಹಿರಿಯ ಪರ್ತಕರ್ತ ಡಿ.ವಿಶ್ವನಾಥ ಮಾತನಾಡಿ, ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಗಟ್ಟಿತನದಿಂದ ಖಂಡಿಸುವ ಮನಸ್ಥಿತಿಯನ್ನು ಪತ್ರಕರ್ತರಾದವರು ರೂಡಿಸಿಕೊಳ್ಳಬೇಕು, ಶೋಷಿತರ, ದಮನಿತರ ದ್ವನಿಯಾಗಬೇಕು ಆಗ ಮಾತ್ರ ನಮ್ಮಗಳ ವೃತ್ತಿಗೆ ಶೋಭೆ ತರುತ್ತದೆ, ಎಂತಹ ಕಠಿಣ ಪರಿಸ್ಥಿತಿ ಬಂದರು ಒಗ್ಗಟ್ಟಿನಿಂದ ಜಯ ಸಾದಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Share This Article
Leave a Comment