ಅಧಿವೇಶನದಲ್ಲಿ ಸಿಎಂ, ಸಭಾಪತಿ, ವಿರೋಧ ಪಕ್ಷದಿಂದ ಸಂತಾಪ

Sirisuddi Kannada
1 Min Read

ಬೆಳಗಾವಿ : ದಾವಣಗೆರೆ ರಾಜ್ಯದ, ದೇಶದ ಗಮನ ಸೆಳೆದಿದೆ ಎಂದರೆ ಅದಕ್ಕೆ ಶಾಮನೂರು ಶಿವಶಂಕರಪ್ಪ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ಸೋಮವಾರ ಸಂತಾಪ ಸೂಚಿಸಿ ಅವರು ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಹಿಂದೆ ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಸಚಿವರಾಗಿದ್ದರು, ಈಗಿನ ಸರ್ಕಾರದಲ್ಲಿ ಅವರೇ ಸ್ವತಃ ತಮ್ಮ ಮಗ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಸಚಿವ ಸ್ಥಾನ ಕೊಡಿಸಿದರು.

ನಾನು ದಾವಣಗೆರೆ ಹೊರಟರೇ, ಅವರೇ ನನಗೆ ಕರೆ ಮಾಡಿ ಮನೆಗೆ ಊಟಕ್ಕೆ ಕರೆಯುತ್ತಿದ್ದರು. ನನ್ನ ಹುಟ್ಟಿದ ಹಬ್ಬದ ಆಚರಣೆ ಮಾಡಿದಾಗ ಅವರ ದಾವಣಗೆರೆ ಅವರ ಒಡೆತನದ ಜಾಗದಲ್ಲಿ ಆಚರಿಸಿದ್ದರು. ನನಗೆ ನನ್ನ ಜನ್ಮ ದಿನಾಂಕ ಗೊತ್ತಿಲ್ಲ, ನಮ್ಮ ಮೇಷ್ಟ್ರು ಬರೆದಿದ್ದ ದಿನಾಂಕ ಅದು. ಶಿವಶಂಕರಪ್ಪ ಅವರು ಸಹಾಯ ಹಸ್ತ ಗುಣ ಬಹಳ ಇತ್ತು. ಕೊವಿಡ್‌ ಸಂದರ್ಭದಲ್ಲಿ 6 ಕೋಟಿ ಹಣ ಸ್ವಂತ ಖರ್ಚು ಮಾಡಿ, ನೆರವಿಗೆ ಧಾವಿಸಿದ್ದರು. ಅವರು ಅಗಲಿರುವುದು ನಮಗೆ ತುಂಬಾ ನೋವು ತಂದಿದೆ.

ಸಭಾಪತಿ ಯು.ಟಿ.ಖಾದರ್‌ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಸದನದ ಸದಸ್ಯರಾಗಿದ್ದರು. ಅವರು ದಾವಣಗೆರೆಯ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರೊರ್ವ ಕೊಡುಗೈ ದಾನಿಯಾಗಿದ್ದರು, ಅವರೂ ತಮ್ಮ ತಂದೆಯ ಜೊತೆಗಿನ ಒಡನಾಟವನ್ನು ಸಭಾಪತಿ ಅವರು ಸ್ಮರಿಸಿದರು. ವಿರೋಧ ಪಕ್ಷದ ನಾಯಕ ಆರ್.ಲೋಕೇಶ ಮಾತನಾಡಿ, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುತ್ತಾ, ಶಾಸಕರು, ಸಂಸದರು, ಸಚಿವರಾಗಿ ಕೆಲಸ ಮಾಡಿದ್ದಾರೆ. ಕ್ಷೇತ್ರ, ಸಮಾಜದ ಕೆಲಸ ಮಾಡುವಾಗ, ವೀರಶೈವ ಮಹಾಸಭಾದ ಬಗ್ಗೆ ನಿಷ್ಠುರವಾಗಿ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗೆ ಯಾರೂ ಪ್ರತಿರೋಧ ಮಾಡುತ್ತಿರಲಿಲ್ಲ ಎಂದು ಅವರ ಒಡನಾಟವನ್ನು ಸ್ಮರಿಸಿದರು. ಸಚಿವರಾದ ಮುನಿಯಪ್ಪ, ಶಾಸಕ ಸುರೇಶ ಕುಮಾರ, ಬಾಲಕೃಷ್ಣ, ಯು.ಬಿ.ಬಣಕಾರ   ಸೇರಿದಂತೆ ಅನೇಕ ಸಚಿವರು, ಶಾಸಕರು ಶಿವಶಂಕರಪ್ಪ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

 

Share This Article
Leave a Comment