ಹರಪನಹಳ್ಳಿ : ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಪೌರ ನೌಕರರು ಸೋಮವಾರ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.
ಪೌರ ಕಾರ್ಮಿಕರು, ಸಿಬ್ಬಂದಿಯನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಜಿಪಿಎಫ್, ಕೆಜಿಐಡಿ ಸವಲತ್ತು ನೀಡಬೇಕು. ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸಿ, ಪ್ರತಿ ತಿಂಗಳು ಸರ್ಕಾರವೇ ಸಂಬಳ ಪಾವತಿಸುವ ನಿಯಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಅಧ್ಯಕ್ಷ ಡಿ.ನಾಗರಾಜ್ ಮಾತನಾಡಿದರು. ಉಪಾಧ್ಯಕ್ಷ ಟಿ.ಎನ್.ರಾಜು, ಕಾರ್ಯದರ್ಶಿ ಪಿ.ಮಂಜುನಾಥ ಪಾಟೀಲ್, ಸಹ ಕಾರ್ಯದರ್ಶಿ ಕರಡಿ ಮಂಜುನಾಥ್, ಎ.ಮಂಜುನಾಥ್, ಸಹ ಸಂಘಟನಾ ಕಾರ್ಯದರ್ಶಿ ಗೀತಾ, ಖಜಾಂಚಿ ಪಿ.ಉಚ್ಚೆಂಗೆಪ್ಪ, ಬಂಡಿ ರಾಮಪ್ಪ, ಎಂ.ಚಂದ್ರಪ್ಪ, ಸುನೀಲ್ ಕುಮಾರ, ಕೆ.ಜ್ಯೋತಿ, ಕೆ.ಸಂತೋಷ ಕುಮಾರ, ಚಿದಾನಂದ, ಟಿ.ಶಾಮರಾಜ್ ಇದ್ದರು.
