ಉಚ್ಚಂಗಿದುರ್ಗ : ಭರತ ಹುಣ್ಣಿಮೆ ಆಚರಣೆ ಸಿದ್ದತೆ ವೀಕ್ಷಿಸಿದ ಎಸ್ಪಿ 

Sirisuddi Kannada
1 Min Read

ಹರಪನಹಳ್ಳಿ : ಜ.31 ರಿಂದ ಆರಂಭವಾಗುವ ಭರತ ಹುಣ್ಣಿಮೆ ಆಚರಣೆ ನಿಮಿತ್ತ ತಾಲ್ಲೂಕಿನ ಉಚ್ಚಂಗಿದುರ್ಗಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಸ್.ಜಾಹ್ನವಿ ಬೇಟಿ ನೀಡಿ ಸಿದ್ದತೆ ಪರಿಶೀಲಿಸಿದರು.

ಅಣಜಿ ಮಾರ್ಗದಿಂದ ಬರುವ ವಾಹನಗಳಿಗೆ ಕೋಟೆ ಕ್ಯಾಂಪ್ ಹತ್ತಿರ ಪಾರ್ಕಿಂಗ್ ವ್ಯವಸ್ಥೆ, ಬಸ್ ನಿಲ್ದಾಣ, ಅರಸೀಕೆರೆ ಮಾರ್ಗದ ವಾಹಗಳಿಗೆ ಕಲ್ಯಾಣ ಕರ್ನಾಟಕಸಾರಿಗೆ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಬೇವಿನಹಳ್ಳಿ ಬರುವ ವಾಹನಗಳಿಗೆ ಉಜ್ಜಿನಿ ಶಾಲೆ ಹತ್ತಿರ ಪಾರ್ಕಿಂಗ್ ವ್ಯವಸ್ಥೆ, ಅಣಜಿಗೆರೆಯಿಂದ ಬರುವ ವಾಹನಗಳಿಗೆ ಕೆ.ಇ.ಬಿ. ಎದುರುಗಡೆ ಪಾರ್ಕಿಂಗ್ ವ್ಯವಸ್ಥೆ, ನಾಲ್ಕು ಕಡೆ ಚೆಕ್ ಪೋಸ್ಟ್ ವ್ಯವಸ್ಥೆ, ಹಾಲಮ್ಮನ ತೋಪಿನಲ್ಲಿ ಕುಡಿಯುವ ನೀರಿನ ಹೊಂಡ, ಶೌಚಾಲಯ ಹಾಗ ತಾತ್ಕಾಲಿಕ ಪೊಲೀಸ್ ಚೌಕಿ ವ್ಯವಸ್ಥೆ ಪರಿಶೀಲಿಸಿದರು.

ಭರತ ಹುಣ್ಣಿಮೆ ಆಚರಣೆ ದಿನ  ಡಿವೈಎಸ್ಪಿ, ನಾಲ್ಕು ಸಿಪಿಐ, 11 ಪಿಎಸ್‌ಐ, 500 ಸಿಬ್ಬಂದಿ ಹಾಗು 2 ಕೆಎಸ್‌ಆರ್ಪಿ, 2 ಡಿ.ಆರ್. ವಾಹನ ನಿಯೋಜಿಸಲಾಗಿದೆ ಎಂದು ಎಸ್ಪಿ ಎಸ್.ಜಾಹ್ನವಿ ಅವರು ಮಾಹಿತಿ ನೀಡಿದರು. ಡಿವೈಎಸ್ಪಿ ಸಂತೋಷ್ ಚೌವ್ಹಾಣ್, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್‌ಐ. ವಿಜಯ್ ಕೃಷ್ಣ, ಗಂಗಾಧರ, ನಾಗರಾಜ್ ಇದ್ದರು.

Share This Article
Leave a Comment